ಅನುಭಾವ ಗೀತೆಗಳು
ಎರಡು ಗೀತೆಗಳು
ಶಿಶುನಾಳ ಶರೀಫ್
೧. ಪಾಲಿಸಯ್ಯ ಪಾರ್ವತಿಪತಿ
-ಶಿಶುನಾಳ ಶರೀಫ್
ಪಾಲಿಸಯ್ಯಾ ಪಾರ್ವತಿಪತಿ
ತ್ರಿಲೋಕದೋಳ್ ವಿರತಿ ||ಪ||
ಗಂಗಾಧರನ ಸ್ತುತಿ
ಧ್ಯಾನಿಸುವ ಆತ್ಮಾಭಿರತಿ
ಕರುಣಿ ಕೈಲಾಸಕಧಿಪತಿ ||೧||
ಗಿರಿಜಾರಮಣನ ಸ್ತುತಿ
ಭಜಿಸಿ ಶಿವಯೋಗ ಸ್ಥಿತಿ
ಸಿದ್ಧಶಿವಯೋಗಿ ಸುಮತಿ ||೨||
ಬೇಗನೆ ಹೊಂದಿಸು ಸದ್ಗತಿ
ಶಿಶುನಾಳಧೀಶನೇ ಗತಿ
ಕೊಡು ಬೇಗನೆ ಮುಕುತಿ ||೩||
*
*
*
೨. ಏನಿದು ಪೇಳು ಆತ್ಮಗೆ ಪರಮಾತ್ಮಗೆ
-ಶಿಶುನಾಳ ಶರೀಫ್
ಏನಿದು ಪೇಳು ಆತ್ಮಗೆ ಪರಮಾತ್ಮಗೆ ||ಪ||
ನಿನ್ನ ನಿಜವನು ತಿಳಿಯದೆ ಭವದೊಳು
ಮುಳು ಮುಳುಗಿ ಶುಭ ಉಳಿಯದೆ ನೀ ||೧||
ಪರಮಸಾಗರ ಜೀವನ ಧರೆಗಾಳ್ದ ಈ ಘನ
ಅರಿಯದವಗೆ ಬರೆ ಉಸುರಿದರೇನಿದು
ಸುರ ಅಜ ಭವ ರುದ್ರಾದಿಗಳಿಗೆ ನೀ ||೨||
ಕುವಲಯರೂಪನಾತನು ಶಿವ ಪ್ರೀತನು
ಭವಸಾಗತರವನು ದಾಂಟಿ
ತವ ಶಿಶುನಾಳಧೀಶನ ಸೇವಕನಿಗೆ ನೀ ||೩||
ಬರಹಕ್ಕಿಳಿಸದವರು: ಕಿಶೋರ್ ಚಂದ್ರ
ಪರಿಶೀಲನೆ : ಕಿಶೋರ್ ಚಂದ್ರ